ಬಾಂಗ್ಲಾದೇಶ: ದುರ್ಗಾ ಪೂಜೆಯ ಪೆಂಡಾಲ್ ನಲ್ಲಿ ಕುರ್ ಆನ್ ಪ್ರತಿ ಇಟ್ಟ ವ್ಯಕ್ತಿಯ ಬಂಧನ

Update: 2021-10-22 17:03 GMT

ಢಾಕಾ, ಅ.22: ಬಾಂಗ್ಲಾದೇಶದಲ್ಲಿ ಅಕ್ಟೋಬರ್ 13ರಂದು ಕೊಮಿಲಾ ಜಿಲ್ಲೆಯಲ್ಲಿ ದುರ್ಗಾಪೂಜೆಯ  ಪೆಂಡಾಲ್ ನಲ್ಲಿ ಕುರ್ ಆನ್  ಪ್ರತಿ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನಲ್ ಪತ್ರಿಕೆ ವರದಿ ಮಾಡಿದೆ. ಕೊಮಿಲಾ ನಗರದಲ್ಲಿ ದುರ್ಗಾಪೂಜೆಯ ಪೆಂಡಾಲ್ ನಲ್ಲಿರಿಸಿದ್ದ ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ದುಷ್ಕರ್ಮಿಯನ್ನು ಇಕ್ಬಾಲ್ ಹುಸೇನ್ ಎಂದು ಗುರುತಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಈತನನ್ನು ಕಾಕ್ಸ್ ಬಝಾರ್ ಸಮೀಪದ ಸುಗಂಧಾ ಬೀಚ್ ನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಆರೋಪಿಯನ್ನು ಬಂಧಿಸಲಾಗಿದ್ದು ಆತನನ್ನು ಕೊಮಿಲಾಕ್ಕೆ ಕರೆದೊಯ್ಯಲಾಗಿದೆ ಎಂದು ಕಾಕ್ಸ್ಬಝಾರ್ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮುಹಮ್ಮ್ ರಫೀಕುಲ್ ಇಸ್ಲಾಮ್ ಹೇಳಿದ್ದಾರೆ.

ಪೆಂಡಾಲ್ ನ ಒಳಗೆ ಕುರ್ ಆನ್ ಪ್ರತಿಯನ್ನು ಕೊಂಡೊಯ್ದ ಹುಸೇನ್ ಅದನ್ನು ಒಳಗಿರಿಸಿ ಅಲ್ಲಿ ಹನುಮಾನ್ ವಿಗ್ರಹದ ಕೈಯಲ್ಲಿದ್ದ ಗದೆಯೊಂದಿಗೆ ತೆರಳಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಆಧಾರದ ಮೇಲೆ ತನಿಖೆ ನಡೆಸಿ ಹುಸೇನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News