ಯಾವುದೇ ಕ್ರಷರ್ ಗಳು ಅಕ್ರಮವಾಗಿಲ್ಲ : ರವೀಂದ್ರ ಶೆಟ್ಟಿ ಬಜಗೋಳಿ

Update: 2021-10-23 12:31 GMT
ರವೀಂದ್ರ ಶೆಟ್ಟಿ

ಕಾರ್ಕಳ: ಯಾವುದೇ ಕ್ರಷರ್ ಗಳು ಅಕ್ರಮವಾಗಿಲ್ಲ, ಸರಕಾರದ ಕಾನೂನು ನಿಯಾಮವಳಿಗಳಲ್ಲಿ ಲೋಪವಿದೆ. ಕ್ರಷರ್ ಗಣಿಗಾರಿಕೆಗಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಉದ್ಯಮ ಸ್ನೇಹಿಯಾಗಿಸುವ ಕಾರ್ಯಕ್ಕೆ ನಾವು ಬದ್ದ ಎಂದು ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಷನ್‌  ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಕಾರ್ಕಳ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಕಚ್ಚಾ ವಸ್ತುಗಳಾದ ಜಲ್ಲಿ ಮರಳು ಕಲ್ಲುಗಳನ್ನು ವಿವಿಧ ಕೈಗಾರಿಕೆ ಕಟ್ಟಡಗಳಿಗೆ  ಪೂರೈಸುವ, ಕ್ವಾರಿ  ಉದ್ಯಮವು ಲಕ್ಷಾಂತರ ಜನರಿಗೆ ನೇರ ಹಾಗು ಪರೊಕ್ಷವಾಗಿ ಉದ್ಯೋಗ ವನ್ನು ನೀಡಿವೆ. ಆದರೆ ಸರಕಾರದ ಕೆಲವು ಅಸಮರ್ಪಕವಾದ ಕಾನೂನುಗಳಿಂದ  ಕಚ್ಚಾವಸ್ತುಗಳ  ಸಾಗಾಣಿಕೆ ಹಾಗೂ ಕಲ್ಲುಗಣಿಗಾರಿಕೆಗಳಿಗೆ ತೊಂದರೆಯಾಗುತಿದ್ದು, ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆ ದಾರರಿಗು ಸಮಸ್ಯೆ ಯಾಗುತಿದ್ದು, ಅದಕ್ಕಾಗಿ  ಸರಕಾರ ಕಾನೂನು ತೊಡಕುಗಳನ್ನು ನಿವಾರಿಸಿ ಕಚ್ಚಾವಸ್ತುಗಳನ್ನು ಪೂರೈಸಲು ಅನುವು ಮಾಡಲು ಸರಕಾರ ಯೋಗ್ಯ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ಎಲ್ಲ ಗುತ್ತಿಗೆದಾರರು  ಎಲ್ಲಾ ವಲಯದ ಕ್ರಷರ್ ಗಳಿಂದ ಪೂರೈಕೆಯಾಗುವ ಕಚ್ಚಾವಸ್ತುಗಳನ್ನು ಪೂರೈಸುವ ಕೈಗಾರಿಗಳಿಗು ತನ್ನ ಚೌಕಟ್ಟಿನೊಳಗೆ ಗಣಿಗಾರಿಗೆ ಕಾನೂನು ಸ್ನೇಹಿಯಾಗಿ ನಿರ್ವಹಿಸಿ ಸರಕಾರಕ್ಕೆ ಸಂದಾಯವಾಗುವ ರಾಜಸ್ವವು ಹೆಚ್ಚುತ್ತದೆ , ಕ್ವಾರಿ ಕ್ರಷರ್  ಉದ್ಯಮದ ಬೇಡಿಕೆ ಏನೆಂದರೆ ಕಾನೂನು ಚೌಕಟ್ಟಿನೊಳಗೆ ಉದ್ಯಮ ನಡೆಸಲು ಅವಕಾಶ ಕೊಡಿ, ಎಲ್ಲರೂ ಕಾನೂನು ಬದ್ಧವಾಗಿ ಉದ್ಯಮ ನಡೆಸಲು ತಯಾರಿದ್ದಾರೆ, ಅದಕ್ಕೆ ಪೂರಕವಾದ ನಿಯಮಗಳಿಲ್ಲ, ಆದ್ದರಿಂದ ಗಣಿಗಾರಿಕೆ ಹಿನ್ನಡೆ ಯಾಗುತ್ತಿದೆ ಎಂದರು.

ಅಕ್ರಮ ಗಣಿಗಾರಿಕೆ ಮಾಡುತಿದ್ದಾರೆ ಎಂದು ಆರೋಪ ಹೋರಿಸುವುದು ಸರಿಯಲ್ಲ. ಸರಕಾರದ ಕಾನೂನಿನಲ್ಲಿ ಸಮಸ್ಯೆ ಇದೆ ಆದ್ದರಿಂದ ಮುಂದಿನ ಮೂರು ತಿಂಗಳ ಒಳಗೆ ಕ್ರಷರ್ ಹಾಗೂ ಕ್ವಾರಿಗಳಿಗಿರುವ ಸಮಸ್ಯೆ ಬಗೆಹರಿಸಲಾಗುವುದು  ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News