ಬಿಲ್ಲಾಡಿ ಐಟಿಐನ ಎಂಆರ್‌ಎಸಿ ವೃತ್ತಿ ಘಟಕ ಉದ್ಘಾಟನೆ

Update: 2021-10-23 15:56 GMT

ಬ್ರಹ್ಮಾವರ, ಅ.23: ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಉಡುಪಿ ಇದರ ಬಿಲ್ಲಾಡಿ ಸಾಬ್ರಕಟ್ಟೆಯ ಆತ್ಮಾನಂದ ಸರಸ್ವತಿ ಐಟಿಐನ ಎಂಆರ್‌ಎಸಿ ವೃತ್ತಿ ಘಟಕವನ್ನು ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶನಿವಾರ ಉದ್ಘಾಟಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್, ಬೆಂಗಳೂರು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಶ್ರೀಕ್ಷೇತ್ರ ಮಂದಾರ್ತಿಯ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಬೆಂಗಳೂರು ಬ್ರಹ್ಮಶ್ರೀ ನಾರಾಯಣಗುರು ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಕಾರ್ಯಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯ ಬನ್ನಂಜೆ ಬಾಬು ಅಮೀನ್, ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ನ ಶಕುಂತಳಾ ಶ್ರೀನಿವಾಸ್, ಪ್ರಾಂಶು ಪಾಲ ರೂಪೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News