ಪಾಕ್ ವಿರುದ್ದ ಭಾರತ ವಿಶ್ವಕಪ್ ಪಂದ್ಯ ಸೋತ ನಂತರ ನಮಗೆ ಹಲ್ಲೆ ಮಾಡಲಾಗಿದೆ: ಕಾಶ್ಮೀರಿ ವಿದ್ಯಾರ್ಥಿಗಳ ಆರೋಪ

Update: 2021-10-25 06:49 GMT
Photo: ndtv.com

ಚಂಡೀಗಡ: ರವಿವಾರ ರಾತ್ರಿ  ಪಾಕಿಸ್ತಾನದ ವಿರುದ್ಧ ಭಾರತ ತನ್ನ ಮೊದಲ ಟ್ವೆಂಟಿ- 20 ವಿಶ್ವಕಪ್ ಪಂದ್ಯವನ್ನು ಸೋತ ನಂತರ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಪಂಜಾಬ್ ನ ಸಂಗ್ರೂರ್ನಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಪಂಜಾಬ್ ಪೊಲೀಸ್ ಅಧಿಕಾರಿಗಳು ತಕ್ಷಣವೇ ಕಾಲೇಜು ಕ್ಯಾಂಪಸ್ ಗೆ ಆಗಮಿಸಿದರು ಮತ್ತು ಭಾಯಿ ಗುರುದಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

"ನಾವು ಇಲ್ಲಿ ಪಂದ್ಯವನ್ನು ನೋಡುತ್ತಿದ್ದೆವು. ನಾವು ಇಲ್ಲಿಗೆ ಅಧ್ಯಯನ ಮಾಡಲು ಬಂದಿದ್ದೇವೆ. ನಾವೂ ಭಾರತೀಯರಾಗಿದ್ದೇವೆ. ನಮಗೆ ಏನು ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು. ನಾವು ಭಾರತೀಯರಲ್ಲವೇ? ಹಾಗಾದರೆ ಮೋದಿ ಏನು ಹೇಳುತ್ತಾರೆ?" ಎಂದು ಕಾಶ್ಮೀರಿ ವಿದ್ಯಾರ್ಥಿಯೊಬ್ಬರು ಕೊಠಡಿಯೊಂದಕ್ಕೆ ಆಗಿರುವ ಹಾನಿಯನ್ನು ತೋರಿಸುತ್ತಿರುವಾಗ ಹೇಳಿದರು.

ಇದುವರೆಗೂ ಯಾವುದೇ ಪೊಲೀಸ್ ಕೇಸ್ ದಾಖಲಾಗಿಲ್ಲ.

ಇಂದು ಬೆಳಿಗ್ಗೆ ಎರಡೂ ಕಡೆಯವರು ಪೊಲೀಸ್ ಮತ್ತು ಕಾಲೇಜು ಅಧಿಕಾರಿಗಳ ಮುಂದೆ ಪರಸ್ಪರ ಕ್ಷಮೆ ಕೇಳಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News