ಅ.27ರಂದು ‘ಉಂಡಾಡಿಗುಂಡ’ ಕಿರು ಚಿತ್ರ ಪ್ರೀಮಿಯರ್ ಶೋ

Update: 2021-10-25 07:42 GMT

ಮಂಗಳೂರು, ಅ.25: ಸಾಮಾಜಿಕ ಕಳಕಳಿಯೊಂದಿಗೆ ವಿದ್ಯಾರ್ಥಿ ಜೀವನದ ನೈಜತೆಯನು ಒಳಗೊಂಡ ಕಿರುಚಿತ್ರ ‘ಉಂಡಾಡಿಗುಂಡ’ ಅ. 27ರಂದು ಪ್ರೀಮಿಯರ್ ಶೋ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂದೇಶ್‌ ಶೆಟ್ಟಿ, ಈ ಕಿರುಚಿತ್ರ ಈಗಾಗಲೇ ಸೆನ್ಸಾರ್‌ನಲ್ಲಿ ಮೆಚ್ಚುಗೆ ಗಳಿಸಿದ್ದು, ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಹಾಗೂ ಹಲವು ಪ್ರಶಸ್ತಿಗಳಿಗಾಗಿ ರವಾನೆಗೊಂಡಿದೆ ಎಂದರು.

ಆರ್.ಕೆ. ಮಂಗಳೂರು ಛಾಯಾಗ್ರಹಣದಲ್ಲಿ ಮೂಡಿ ಬಂದ ಸಿನೆಮಾ ಇದಾಗಿದ್ದು, ಕೇರಳ ಮೂಲದ ಯುವ ನಿರ್ದೇಶಕರ ರಂಜಿತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನೆಮಾಕ್ಕೆ ವೀರೇಂದ್ರ ಸುರ್ಣ ಕಟೀಲ್ ನಿರ್ಮಾಪಕರಾಗಿ ಸಹಕರಿಸಿದ್ದು, ಧನ್ವಿತ್ ವಿ. ಸುವರ್ಣ ಪ್ರಮುಖ ಪಾತ್ರದಲ್ಲಿದ್ದಾರೆ ಎಂದು ಅವರು ಹೇಳಿದರು.

ಅ. 27ರಂದು 10 ಗಂಟೆಗೆ ಕಿನ್ನಿಗೋಳಿಯ ಮೇರಿವೇಲಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಚಿತ್ರರಂಗದ ನಟ ನಟಿಯರು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಅ. 28ರಂದು ಕಿರು ಚಿತ್ರ ಸಂಜೆ 5 ಗಂಟೆಗೆ ಸಿರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖ ಪಾತ್ರಧಾರಿ ಧನ್ವಿತ್ ವಿ. ಸುವರ್ಣ, ನಿರ್ದೇಶಕ ರಂಜಿತ್ ಮುಕೋಡ್, ನಿರ್ಮಾಪಕ ವೀರೇಂದ್ರ ಸುವರ್ಣ ಕಟೀಲ್, ಶರ್ಮಿಳಾ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News