ಎಂಜಿಎಂ ಕಾಲೇಜು ಪ್ರಾಂಶುಪಾಲರ 4ನೇ ಕೃತಿ ಬಿಡುಗಡೆ

Update: 2021-10-25 13:09 GMT

ಉಡುಪಿ, ಅ.25: ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ ಇವರ ನಾಲ್ಕನೇ ಕೃತಿ ‘ದಂಡಿಗೆ ಹನುಮ’ವನ್ನು ಉಡುಪಿಯ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಸೋಮವಾರ ಲೋಕಾರ್ಪಣೆ ಗೊಳಿಸಿದರು.

ಹೊನ್ನಾವರ ತಾಲೂಕಿನ ಚಂದಾವರದಲ್ಲಿರುವ ಹನುಮಂತ ಕ್ಷೇತ್ರದ ಕುರಿತು ಈ ಕೃತಿಯನ್ನು ರಚಿಸಲಾಗಿದೆ. ಕೃತಿಯ ಬಗ್ಗೆ ಅದಮಾರುಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಶಾರದಾ ದೇವಿದಾಸ್, ಎಂಜಿಎಂ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಜ್ಯೋತಿ ವಿಜಯ ಹಾಗೂ ಎಂ.ಜಿ.ಎಂ. ಕಾಲೇಜಿನ ಅಧ್ಯಾ ಪಕ ರಾಜಮೂರ್ತಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News