ಇನೋಳಿ: ಮದ್ರಸದಲ್ಲಿ ಸಾಹಿತ್ಯ ಸಂಗಮ

Update: 2021-10-25 14:11 GMT

ಮಂಗಳೂರು, ಅ.25: ಪಾವೂರು ಗ್ರಾಮದ ಇನೋಳಿ ಅಲ್‌ಮುಬಾರಕ್ ಜುಮಾ ಮಸೀದಿ ಅಧೀನದ ಬಿ. ಸೈಟ್ ಮಸ್ಜಿದುರ್ರಹ್ಮಾನ್ ವಠಾರದಲ್ಲಿ ರವಿವಾರ ಹಿದಾಯತುಲ್ ಇಸ್ಲಾಂ ಮದ್ರಸದ ಮಕ್ಕಳ ಸಾಹಿತ್ಯ ಸಂಗಮ ಕಾರ್ಯಕ್ರಮ ನಡೆಯಿತು.

ಅಸ್ಸಯ್ಯಿದ್ ಶಿಹಾಬ್ ತಂಙಳ್ ಮದಕ, ಅಲ್ ಮುಬಾರಕ್ ಜುಮಾ ಮಸೀದಿಯ ಖತೀಬ್ ಐ.ಕೆ.ಅಬೂಬಕರ್ ಮದನಿ, ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಮಾತನಾಡಿದರು.

ಇನೋಳಿ ಎ.ಸೈಟ್ ಹಿದಾಯತುಲ್ ಇಸ್ಲಾಂ ಮುದರ್ರಿಸ್ ಹಮೀದ್ ಅಝ್ಹರಿ ಕಾರ್ಯಕ್ರ ಮ ಉದ್ಘಾಟಿಸಿದರು. ಮುಅಲ್ಲಿಂ ಅಬ್ದುಲ್ ಜಬ್ಬಾರ್ ದಾರಿಮಿ, ಮುಅದ್ದಿನ್ ಕುಂಞಿ ಅಹ್ಮದ್ ಮುಸ್ಲಿಯಾರ್, ಅಲ್ ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಚಕ್ಕರ್,ಸದಸ್ಯ ಅಕ್ರಂ ಇನೋಳಿ, ಹಿದಾಯತುಲ್ ಇಸ್ಲಾಂ ಮದ್ರಸದ ಅಧ್ಯಾಪಕ ಅಶ್ರಫ್ ಮುಸ್ಲಿಯಾರ್, ಅಧ್ಯಕ್ಷ ಟಿ.ಎಚ್. ನಝೀರ್, ನುಸ್ರತುಲ್ ಮಸಾಕೀನ್ ಅಸೋಸಿಯೇಶನ್‌ನ ಅಧ್ಯಕ್ಷ ಇಸ್ಮಾಯಿಲ್ ಕಿಲ್ಲೂರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹುಸೈನ್ ಬಾವು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News