ಉ.ಕ. ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ; ಅವಧಿ ವಿಸ್ತರಣೆ

Update: 2021-10-25 15:39 GMT

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮಾದಿನಾಚರಣೆಯ ಅಂಗವಾಗಿ ಭಟ್ಕಳದ ಜಮಾಅತೆ ಇಸ್ಲಾಮಿ ಹಿಂದ್ ಶಾಖೆಯು ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯ ದಿನಾಂಕವನ್ನು ನ.10ರವರೆಗೆ ವಿಸ್ತರಿಸಿರುವುದಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲಾದ್ಯಂತ ಹಲವು ಕಡೆಗಳಿಂದ ಆಸಕ್ತರು ಪ್ರಬಂಧ ಸ್ಪರ್ಧೆಯ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿಕೊಂಡಿರುವ ಈ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದೂ ಸೀರತ್ ಪ್ರಬಂಧ ಸ್ಪರ್ಧೆಯ ಸಂಚಾಲಕ ಮುಜಾಹಿದ್ ಮುಸ್ತಫಾ ತಿಳಿಸಿದ್ದಾರೆ. 

ಪ್ರಬಂಧವು ಕನ್ನಡ ಭಾಷೆಯಲ್ಲಿ ನುಡಿ/ಬರಹ ತಂತ್ರಾಂಶದಲ್ಲಿ ಎ4 ಅಳತೆಯ ಮೂರು ಪುಟಗಳು ಮೀರದಂತೆ ಟೈಪಿಸಿ yammarmanvi@gmail.com ಈಮೇಲ್ ಮಾಡುವುದು ಮತ್ತು ಹಾರ್ಡ್ ಕಾಪಿಯನ್ನು ಸಂಚಾಲಕರು ಸೀರತ್ ಪ್ರಬಂಧ ಸ್ಪರ್ಧೆ-2021, ಜಮಾಅತೆ ಇಸ್ಲಾಮಿ ಹಿಂದ್, ದಾವತ್ ಸೆಂಟರ್ ಸುಲ್ತಾನ್ ಸ್ಟ್ರೀಟ್ ಭಟ್ಕಳ-581320 ಈ ವಿಳಾಸಕ್ಕೆ ಕಳುಹಿಸಿಕೊಡುವುದು. ಹೆಚ್ಚಿನ ಮಾಹಿತಿ ಮಾಹಿತಿಗಾಗಿ 9886455416 ನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News