ಕಾರ್ಕಳ ವಕೀಲರ ಸಂಘದ ಚುನಾವಣೆ : ಅ‍ಧ್ಯಕ್ಷರಾಗಿ ಸುನಿಲ್‌ ಕುಮಾರ್‌ ಶೆಟ್ಟಿ

Update: 2021-10-26 12:46 GMT
ಸುನಿಲ್‌ ಕುಮಾರ್‌ ಶೆಟ್ಟಿ

ಕಾರ್ಕಳ : ಕಾರ್ಕಳ ವಕೀಲರ ಸಂಘದ ಅ‍ಧ್ಯಕ್ಷರಾಗಿ ಎಸ್‌ಕೆಎಸ್‌ ಲಾ ಚೇಂಬರ್‌ನ ಸುನಿಲ್‌ ಕುಮಾರ್‌ ಶೆಟ್ಟಿ ಆಯ್ಕೆಯಾದರು.

ಅ. 25ರಂದು ಬಾರ್‌ ಅಸೋಸಿಯೇಷನ್‌ನಲ್ಲಿ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿದ್ದು, ಕಾರ್ಯದರ್ಶಿ ಯಾಗಿ ಪದ್ಮಪ್ರಸಾದ್‌ ಜೈನ್‌ ಪುನರಾಯ್ಕೆಯಾದರು. ಕಾರ್ಕಳ ಬಾರ್ ಅಸೋಸಿಯೇಷನ್ ನ ಅಧ್ಯಕ್ಷ ರಾಗಿ ಈ ಹಿಂದೆ ಕೆಲಸ ನಿರ್ವಹಿಸಿರುವ ಅವರು ಕಾರ್ಕಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ಜನತಾದಳ ಕಾರ್ಕಳ ಇದರ ಅಧ್ಯಕ್ಷರಾಗಿ, ಕಾರ್ಕಳ ತಾಲೂಕಿನ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾಗಿ, ಕಾರ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಹಿರಿಯ ನ್ಯಾಯವಾದಿ ಕೆ ನವೀನ್‌ ಚಂದ್ರ ಹೆಗ್ಡೆ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News