ಅ.27: ವಿವಿಧೆಡೆ ವಿದ್ಯುತ್ ವ್ಯತ್ಯಯ

Update: 2021-10-26 17:29 GMT

ಮಂಗಳೂರು, ಅ.26: ನಗರದ ಅತ್ತಾವರ ಉಪ ಕೇಂದ್ರದಿಂದ ಹೊರಡುವ ಮುನೀಶ್ವರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿಗಳನ್ನು ನಡೆಯಲಿರುವುದರಿಂದ ಅ.27ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪೊಲೀಸ್‌ ಲೇನ್, ಪಿಡಬ್ಲುಡಿ ಕಮರ್ಷಿಯಲ್ ಆಫೀಸ್, ಧೂಮಪ್ಪಕಂಪೌಂಡ್, ಓಲ್ಡ್‌ಕೆಂಟ್‌ರಸ್ತೆ, ಕೇರಳ ಸಮಾಜರಸ್ತೆ ಹಾಗೂ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಕೂಳೂರು/ಮುಲ್ಲಕಾಡು: ನಗರದ ಎಸ್‌ಆರ್‌ಎಸ್ ಕಾವೂರು ಉಪ ಕೇಂದ್ರದಿಂದ ಹೊರಡುವ ಕೂಳೂರು, ಮುಲ್ಲಕಾಡು, ಮರಕಡ, ಕುಂಜತ್ತಬೈಲ್ ಮತ್ತು ಚಿಲಿಂಬಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಅ.27ರ ಬೆ:ಗ್ಗೆ 9:30 ರಿಂದ ಸಂಜೆ 4:30ರ ವರೆಗೆ ಗಾಂಧಿನಗರ, ಶಾಂತಿನಗರ, ವಿದ್ಯಾನಗರ ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರ ಕೂಳೂರು, ಎ.ಜೆ. ಹಾಸ್ಪಿಟಲ್, ಮುಲ್ಲಕಾಡು, ಮರಕಡ, ಜ್ಯೋತಿನಗರ, ಕೊರಂಟಾಡಿ, ಬಸವನಗರ, ಮಿಲ್ಲತ್‌ನಗರ, ಕುಂಜತ್ತಬೈಲ್, ಕೊಟ್ಟಾರ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News