ಉಡುಪಿ : ಅ.29ರಂದು ‘ಕರುಣಾಲಯ’ ಉದ್ಘಾಟನೆ
Update: 2021-10-28 14:09 GMT
ಉಡುಪಿ, ಅ.28: ಉಡುಪಿಯ ಲೋಂಬಾರ್ಡ್ ಮೆಮೊರಿಯಲ್ (ಮಿಶನ್) ಆಸ್ಪತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಸ್ಥಾಪಿಸಲಾದ ನೂತನ ಜೆರಿಯಟ್ರಿಕ್ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಇದರ ಉದ್ಘಾಟನೆಯು ಅ.29ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಈ ಯುನಿಟ್ನ್ನು ಸಿಎಸ್ಐ ಕೆಎಸ್ಡಿ ಬಿಷಪ್ ರೆ.ಮೋಹನ್ ಮನೋ ರಾಜ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘು ಪತಿ ಭಟ್, ಡಿಎಚ್ಓ ಡಾ.ನಾಗಭೂಷಣ ಉಡುಪ, ಉಡುಪಿ ಕೆಎಸ್ಡಿ ಏರಿಯಾ ಚೇಯರ್ಮೆನ್ ರೆ.ಐವನ್ ಡಿ ಸೋನ್ಸ್, ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ ಭಾಗವಹಿಸಲಿರುವರು. ಅಧ್ಯಕ್ಷತೆ ಯನ್ನು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.