ಪೈಲೆಟ್ ಕೋರ್ಸ್‌ಗೆ ಧನ ಸಹಾಯ

Update: 2021-10-28 14:19 GMT

ಮಂಗಳೂರು, ಅ.28: ಪೈಲೆಟ್ ಕೋರ್ಸ್‌ಗೆ ಆಯ್ಕೆಯಾದಂತಹ ಅಡ್ಡೂರಿನ ಹಾಫೀಝ್ ಮುಹಮ್ಮದ್ ಮುನವ್ವರ್‌ರಿಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್‌ರ ತಮ್ಮ ಹಾಜಿ ನಿಸಾರ್ ಅಹ್ಮದ್ ನೀಡಿದ ಧನ ಸಹಾಯ ವನ್ನು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಖಾಂತರ ಗುರುವಾರ ಹಸ್ತಾಂತರಿಸಲಾಯಿತು.

ಈ ಸಂಧರ್ಭ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಹಾಜಿ ಮುಹಮ್ಮದ್ ಬಪ್ಪಳಿಗೆ, ಎಂ.ಎ.ಅಶ್ರಫ್ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಹಾಜಿ ಎಚ್.ಕೆ. ಇಲ್ಯಾಸ್ ಕಡಬ ಮತ್ತಿತರರು ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News