ಉಡುಪಿಯಲ್ಲಿ ಮಂಗಳೂರಿನ ಬಾಲಕನ ರಕ್ಷಣೆ

Update: 2021-10-28 15:15 GMT

ಉಡುಪಿ, ಅ.28: ಉಡುಪಿ ನಗರದ ಬಸ್ ನಿಲ್ದಾಣದಲ್ಲಿ ಇಂದು ಸಂಜೆ 6.30ರ ಸುಮಾರಿಗೆ ಬಾಲಕನೋರ್ವನನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಬಾಲಕನ ಹೆಸರು ಅಲ್ತಾಫ್(10) ಎಂದು ತಿಳಿದು ಬಂದಿದ್ದು, ಆತ ಹೆದರಿ ಮನೆ ಬಿಟ್ಟು ಮಂಗಳೂರಿನಿಂದ ಬಸ್ ಮೂಲಕ ಉಡುಪಿ ಬಂದಿರುವುದಾಗಿ ತಿಳಿಸಿದ್ದಾನೆ.

ಬಸ್ ನಿಲ್ದಾಣದಲ್ಲಿ ಆಳುತ್ತಿದ್ದ ಬಾಲಕನ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿದ ವಿಶು ಶೆಟ್ಟಿ ಅಂಬಲಪಾಡಿ, ಆತನನ್ನು ರಕ್ಷಿಸಿ ಕುಕ್ಕಿಕಟ್ಟೆಯ ಚೆಲ್ಡ್ ಹೆಲ್ಪ್ಲೈನ್ಗೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News