ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾದ ರಜನಿಕಾಂತ್, ಸುಮಾರು 30 ಪೊಲೀಸ್ ಸಿಬ್ಬಂದಿ ನಿಯೋಜನೆ

Update: 2021-10-29 14:35 GMT

ಚೆನ್ನೈ: ನಟ ರಜನಿಕಾಂತ್ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದು, ನಟನ ಅಭಿಮಾನಿಗಳು ಆಸ್ಪತ್ರೆಗೆ ನುಗ್ಗುವುದನ್ನು ತಡೆಯಲು ಆಸ್ಪತ್ರೆಯ ಹೊರಗೆ ಸುಮಾರು 30 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಜನಿಕಾಂತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ  ಹಾಗೂ  ಅವರು ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದು ನಟನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಸ್ಪತ್ರೆಯು ಇನ್ನೂ ವೈದ್ಯಕೀಯ ಬುಲೆಟಿನ್ ಅನ್ನು ಬಿಡುಗಡೆ ಮಾಡಲಿಲ್ಲ.

 ಇಬ್ಬರು ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ  ನಾಲ್ವರು ಮಹಿಳಾ ಕಾನ್‌ಸ್ಟೆಬಲ್‌ಗಳು ತಮ್ಮ ರುಜುವಾತುಗಳನ್ನು ಪರಿಶೀಲಿಸಿದ ನಂತರ ಜನರನ್ನು ಪ್ರವೇಶಿಸಲು ಅನುಮತಿಸುತ್ತಿದ್ದರು.

ನಿಯೋಜಿಸಲಾದ ಸಿಬ್ಬಂದಿಗಳಲ್ಲಿ ತಲಾ 10 ಜನರಂತೆ ತಮಿಳುನಾಡು ವಿಶೇಷ ಪೊಲೀಸರ ಎರಡು ವಿಭಾಗಗಳು ಸೇರಿವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಸ್ಪಂದಿಸಲು ಆಸ್ಪತ್ರೆ ಎದುರು ಪೊಲೀಸರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News