ಕಾಟಿಪಳ್ಳ: ಉಚಿತ ನೇತ್ರ ತಪಾಸಣಾ ಶಿಬಿರ

Update: 2021-10-29 14:39 GMT

ಮಂಗಳೂರು, ಅ.29: ಅನ್ಸಾರಿಯಾ ಜುಮ್ಮಾ ಮಸ್ಜಿದ್ 9ನೇ ಬ್ಲಾಕ್ ಇದರ ಅಂಗ ಸಂಸ್ಥೆಯಾದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಹಾಗೂ ಅಂಧರ ಸೇವಾ ಸಂಘ ದ.ಕ., ಜಮೀಯ್ಯತುಲ್ ಫಲಾಹ್, ಮಂಗಳೂರು ನಗರ ಘಟಕ ಇದರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ ಅಂಧರ ಸೇವಾ ಸಂಘದ ಅಧ್ಯಕ್ಷ ಗುರುರಾಜ್ ರಾವ್, ನೇತ್ರದ ಮಹತ್ವದ ಕುರಿತು ಸಭಿಕರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭ ಅನ್ಸಾರಿಯಾ ಜುಮ್ಮಾ ಮಸ್ಜಿದ್ ಇದರ ಮಾಜಿ ಅಧ್ಯಕ್ಷರಾದ ಮನ್ಸೂರ್, ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ದುರ್ರಝಾಕ್, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ರಿಝ್ವಾನ್ 9ನೇ ಬ್ಲಾಕ್ ಉಪಸ್ಥಿತರಿದ್ದರು.

ಅಲ್ ಆಮೀನ್ ವೆಲ್ಫೇರ್ ಅಸೋಸಿಯೇಶನ್‌ನ ಪ್ರದಾನ ಕಾರ್ಯದರ್ಶಿ ಶರೀಫ್ ಸ್ವಾಗತಿಸಿ, ವಂದಿಸಿದರು. ಕಾಟಿಪಳ್ಳ 9ನೇ ಬ್ಲಾಕ್‌ನ ಹಲವರು ಶಿಬಿರದ ಪ್ರಯೋಜನ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News