×
Ad

ಪುತ್ತೂರು: ಸಿಡಿಲು ಬಡಿದು ಕೃಷಿಕ ಮೃತ್ಯು

Update: 2021-10-31 09:17 IST

ಪುತ್ತೂರು, ಅ.31: ಸಿಡಿಲು ಬಡಿದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಎಂಬಲ್ಲಿ ನಡೆದಿದೆ.

ದರ್ಬೆತ್ತಡ್ಕ ನಿವಾಸಿ ಕೃಷಿಕ ಪುರುಷೋತ್ತಮ ಪೂಜಾರಿ(47)  ಮೃತಪಟ್ಟವರು. ಪುರುಷೋತ್ತಮ ಪೂಜಾರಿ ಶುಕ್ರವಾರ ಸಂಜೆ ಮನೆಯೊಳಗಿದ್ದ ವೇಳೆ ಸಿಡಿಲು ಬಡಿದು ಗಂಭೀರ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮನೆ ಮಂದಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಮೃತರು ಪತ್ನಿ , ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮೂಲತಃ ಸುಳ್ಯದವರಾಗಿರುವ ಪುರುಷೋತ್ತಮ ಪೂಜಾರಿ ದರ್ಬೆತಡ್ಕದಿಂದ ವಿವಾಹವಾಗಿದ್ದು ಮನೆಯ ಅಳಿಯನಾಗಿ ಇಲ್ಲಿಯೇ ವಾಸವಾಗಿದ್ದರು. ಘಟನೆಯಿಂದ ಮನೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News