ಮುಡಿಪು: 'ಮರೆಯಲಾಗದ ಮಾಣಿಕ್ಯ ಇಂದಿರಾಗಾಂಧಿ - ನೂರೊಂದು ನೆನಪು ಕಾರ್ಯಕ್ರಮ'

Update: 2021-10-31 16:25 GMT

ಮುಡಿಪು : ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ವತಿಯಿಂದ 'ಮರೆಯಲಾಗದ ಮಾಣಿಕ್ಯ ಇಂದಿರಾಗಾಂಧಿ ನೂರೊಂದು ನೆನಪು' ಎಂಬ ಕಾರ್ಯಕ್ರಮವು ಮುಡಿಪು ಎಸ್ ಕೆ ಆಡಿಟೋರಿಯಮ್ ನಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಮತಾ ಡಿಎಸ್ ಗಟ್ಟಿ, ಲೆಕ್ಕ ಪರಿಶೋಧಕರಾದ ಪುಂಡರೀಕ್ಷ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟುಗೋಳಿ, ಪಕ್ಷದ ಪ್ರಮುಖರಾದ ವೃನ್ದಾ ಪೂಜಾರಿ, ಪದ್ಮನಾಭ ನರಿಂಗಾನ, ಅರುಣ್ ಡಿಸೋಜ, ನಾಸಿರ್ ನಡುಪದವು, ಗ್ರಾಮ ಪಂ. ಅಧ್ಯಕ್ಷರುಗಳು, ಸದಸ್ಯರು, ಪಕ್ಷದ ಪದಾಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಅವರು ಇಂದಿರಾ ಗಾಂಧಿ ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ವಿಚಾರಗಳನ್ನು ಮಂಡಿಸಿದರು. ಮುಡಿಪು ಬ್ಲಾಕ್ ಪಂಚಾಯತ್ ರಾಜ್ ಸಂಘಟನೆಯ ಮುಖ್ಯಸ್ಥರಾದ ಹೈದರ್ ಕೈರಂಗಳ ಸ್ವಾಗತಿಸಿ, ಮುಡಿಪು ಬ್ಲಾಕ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News