ರಾಜಸ್ಥಾನ: ಬಾಲಕನಿಗೆ ಲೈಂಗಿಕ ಕಿರುಕುಳ; ನ್ಯಾಯಾಧೀಶರ ಬಂಧನ

Update: 2021-11-03 17:12 GMT

ಜೈಪುರ, ನ. 2: ರಾಜಸ್ಥಾನದ ಭರತ್‌ಪುರದಲ್ಲಿ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಧೀಶರೊಬ್ಬರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿಸುವ ಮುನ್ನ ನ್ಯಾಯಾಧೀಶರನ್ನು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಬಾಲಕನ ತಾಯಿ ರವಿವಾರ ದೂರು ದಾಖಲಿಸಿದ ಬಳಿಕ ಭರತ್‌ಪುರದ ವಿಶೇಷ ಭ್ರಷ್ಟಾಚಾರ ತಡೆ ನ್ಯಾಯಾಲಯದ ನ್ಯಾಯಾಧೀಶರನ್ನು ಬಂಧಿಸಲಾಯಿತು. ಅನಂತರ ಅವರು ಹುದ್ದೆಯಿಂದ ಅಮಾನತುಗೊಂಡಿದ್ದಾರೆ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಭರತ್‌ಪುರ ಪೊಲೀಸ್ ಅಧೀಕ್ಷಕ ದೇವೇಂದ್ರ ಕುಮಾರ್ ಬಿಷ್ಣೋಯಿ ತಿಳಿಸಿದ್ದಾರೆ.

ಹಣಕ್ಕಾಗಿ ಬಾಲಕ ಹಾಗೂ ಆತನ ಕುಟುಂಬ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದೆ ಎಂದು ನ್ಯಾಯಾಧೀಶರು ಆರೋಪಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ರಾಜಸ್ಥಾನ ಉಚ್ಚ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಈ ಉದ್ದೇಶಕ್ಕಾಗಿ ತಂಡವೊಂದನ್ನು ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News