ದಿಲ್ಲಿ ತಲುಪಿದ ಹರೇಕಳ ಹಾಜಬ್ಬ; ನ.8 ರಂದು ಪದ್ಮಶ್ರೀ ಪ್ರಶಸ್ತಿ ಪ್ರದಾನ
Update: 2021-11-07 15:33 GMT
ಮಂಗಳೂರು : ಭಾರತ ಸರ್ಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಪಡೆಯಲು ಅಕ್ಷರ ಸಂತ, ಹರೇಕಳ ಹಾಜಬ್ಬ ರವಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಸ್ಪೈಸ್ ಜೆಟ್ ವಿಮಾನದ ಮೂಲಕ ತಲುಪಿದ್ದಾರೆ.
ಹೊಸದಿಲಿಯಲ್ಲಿ ನ.8ರಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಂದ ಹರೇಕಳ ಹಾಜಬ್ಬ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಕಾರಿನಲ್ಲಿ ರವಿವಾರ ಮುಂಜಾನೆ ಹಾಜಬ್ಬ ಮತ್ತು ಅವರ ಜೊತೆ ದೆಹಲಿಗೆ ತೆರಳುವ ಅವರ ತಮ್ಮನ ಮಗನನ್ನು ಹರೇಕಳದ ಮನೆಯಿಂದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಹಾಜಬ್ಬ ಅವರು ಸೋಮವಾರ ಬೆಳಗ್ಗೆ 11ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.