ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ

Update: 2021-11-10 16:27 GMT

ಬೈಂದೂರು, ನ.10: ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ಮೋಸ ದಿಂದ ವರ್ಗಾಯಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮರವಂತೆ ನಿವಾಸಿ ಎಂ.ಶಂಕರ ಖಾರ್ವಿ (76) ಎಂಬವರಿಗೆ ನ.9ರಂದು ಸಂಜೆ ಕೆವೈಸಿ ಮಾಹಿತಿಯನ್ನು ಸರಿಪಡಿಸಲು ಮೊಬೈಲ್ ಸಂದೇಶ ಬಂದಿದ್ದು, ನಂತರ ಅಪರಿಚಿತ ವ್ಯಕ್ತಿಗಳು ಬ್ಯಾಂಕಿನ ಅಧಿಕಾರಿ ಎಂದು ನಂಬಿಸಿ ಕರೆ ಮಾಡಿ ದ್ದರು. ಬ್ಲಾಕ್ ಆಗಿರುವ ಕೆವೈಸಿ ಸರಿಪಡಿಸಿಲು ಎ.ಟಿ.ಎಂ ಕಾರ್ಡಿನ ನಂಬ್ರವನ್ನು ಕೇಳಿದ್ದು ಅದರಂತೆ ಶಂಕರ ಖಾರ್ವಿ, ತನ್ನಲ್ಲಿದ್ದ ಎರಡು ಎಂಟಿಎಂ ಕಾರ್ಡಿನ ನಂಬ್ರ ಹಾಗೂ ಓಟಿಪಿಯನ್ನು ಅಪರಿಚಿತ ವ್ಯಕ್ತಿಗೆ ನೀಡಿದ್ದರು.

ಇದನ್ನು ಬಳಸಿಕೊಂಡು ಆತನು ಶಂಕರ ಖಾರ್ವಿಯ ಖಾತೆಯಿಂದ ಒಟ್ಟು 3,89,423ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News