ಉಡುಪಿ: ಹಲ್ಲೆ ನಡೆಸಿದ ಆರೋಪಿಗೆ ಶಿಕ್ಷೆ

Update: 2021-11-12 14:33 GMT

ಉಡುಪಿ: ತಾಲೂಕಿನ ಬೆಳ್ಳಂಪಳ್ಳಿ ಗ್ರಾಮದ ದೊಡ್ಡನಗುಡ್ಡೆ ನಿವಾಸಿ ಮಹೇಶ್ (28) ಎಂಬ ಆರೋಪಿ, ಪುಷ್ಪಾವತಿ ಎಂಬವರಿಗೆ ಸೇರಿದ ಅದೇ ಗ್ರಾಮದ ಸರ್ವೇ ನಂ. 72-4ನೇ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ, ದಾರಿ ವಿಚಾರದಲ್ಲಿ ತಕರಾರು ತೆಗೆದು ಬಾಲು ಕೋಟ್ಯಾನ್ ಹಾಗೂ ಪುಷ್ಪಾವತಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿ ಆರೊೀಪಿಯ ಮೇಲೆಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಹಿರಿಯಡ್ಕ ಠಾಣೆಯ ತನಿಖಾಧಿಕಾರಿ ಲಕ್ಷ್ಮಣ್ ಪ್ರಭು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ, ಈ ಪ್ರಕರಣದ ಆರೋಪಿ ವಿರುದ್ಧದ ಆರೋಪ ರುಜುವಾತಾಗಿದೆ ಎಂದು ತೀರ್ಪಿತ್ತು, ಈ ಆರೋಪಿಗೆ 7 ತಿಂಗಳು ಸಜೆ ಕಾರಾಗೃಹ ವಾಸದ ಶಿಕ್ಷೆ ಮತ್ತು 300 ರೂ. ದಂಡ ರೂಪದ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News