ಸುಳ್ಯ: ತೋಟದ ಕೆರೆಯಲ್ಲಿ ಮೊಸಳೆ ಪತ್ತೆ

Update: 2021-11-12 15:20 GMT

ಸುಳ್ಯ: ದೇವಚಳ್ಳ ಗ್ರಾಮದ ವ್ಯಕ್ತಿಯೊಬ್ಬರ ಕೆರೆಯಲ್ಲಿ ಮೊಸಳೆಯೊಂದು ಕಂಡು ಬಂದಿದ್ದು, ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರಿಸಿದ ಘಟನೆ ಗುರುವಾರ ವರದಿಯಾಗಿದೆ.  

ದೇವಚಳ್ಳ ಗ್ರಾಮದ ಬಾಲಕೃಷ್ಣ ದೇವ ಎಂಬವರ ತೋಟದ ಕೆರೆಯಲ್ಲಿ ಗುರುವಾರ ಮುಂಜಾನೆ ಮೊಸಳೆಯೊಂದು ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ದೊರೆತ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿದರು. ಅರಣ್ಯ ಇಲಾಖೆ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಬೇರೆಡಗೆ ಸಾಗಿಸಲಾಯಿತೆಂದು ತಿಳಿದು ಬಂದಿದೆ. 

ಕಾರ್ಯಾಚರಣೆಯಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಗಿರೀಶ್, ಫಾರೆಸ್ಟರ್ ರವೀಂದ್ರ, ಅರಣ್ಯ ಪಾಲಕರಾದ ಲಿಖಿತ್, ಬಿ.ಜಿ.ಚಂದ್ರು, ಚಾಲಕ ಪುರುಷೋತ್ತಮ, ಸಿಬ್ಬಂದಿ ತೀರ್ಥರಾಮ ಹಾಗೂ ಸ್ಥಳೀಯರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News