ಕುಂದಾಪುರ ಯೂಸುಫ್ ವಲಿಯುಲ್ಲಾಹಿ ಉರೂಸ್ ಸಮಾರಂಭ

Update: 2021-11-14 15:25 GMT

 ಕುಂದಾಪುರ, ನ.14: ಇತಿಹಾಸ ಪ್ರಸಿದ್ಧ ಹಝರತ್ ಸುಲ್ತಾನ್ ಸಯ್ಯದ್ ಯೂಸುಫ್ ವಲಿಯುಲ್ಲಾಹಿ ಇವರ ಉರೂಸ್ ಸಮಾರಂಭ ಶನಿವಾರ ನಡೆಯಿತು.

ಬೆಳಗ್ಗೆ ಕೂಟು ಝಿಯಾರತ್ ಹಾಗೂ ಯೂಸೂಪಿಯ ಮೌಲೂದ್ ಪಾರಾಯಣ ಜರಗಿತು. ಮಗ್ರಿಬ್ ನಮಾಜ್ನ ಬಳಿಕ ಜಿಲ್ಲೆಯ ಪ್ರತಿಷ್ಠಿತ ದಫ್ ಕಾರ್ಯಕರ್ತರಿಂದ ಬೃಹತ್ ಸಂದಲ್ ಮೆರವಣಿಗೆ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ದರ್ಗಾ ಕಮಿಟಿ ಆಡಳಿತ ಮಂಡಳಿಯ ಮುಖ್ಯಸ್ಥರಾದ ಕೆ.ಎಸ್.ಕಾಸಿಂ ಕೋಯಾ, ಸಯ್ಯದ್ ಜಾಪರ್ ಕೋಯಾ ಮತ್ತು ಪುರಸಭೆ ಸದಸ್ಯ ಅಬ್ಬು ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News