ಅಂಗಡಿಯಲ್ಲೇ ಆತ್ಮಹತ್ಯೆ
Update: 2021-11-15 16:03 GMT
ಬ್ರಹ್ಮಾವರ, ನ.15: ಅನಾರೋಗ್ಯದಿಂದ ಬಳಲುತ್ತಿದ್ದ ಹೆಗ್ಗುಂಜೆ ಗ್ರಾಮದ ಮೂಡುಮಕ್ಕಿ ನಿವಾಸಿ ಉಮೇಶ್ ಪೂಜಾರಿ(52) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.15ರಂದು ಬೆಳಗ್ಗೆ ತಾನು ಕೆಲಸ ಮಾಡುವ ಮಂದಾರ್ತಿ ಹೈಸ್ಕೂಲ್ ಬಳಿಯ ಪಂಚಾಯತ್ ಕಟ್ಟಡದಲ್ಲಿನ ಯಕ್ಷಗಾನ ವೇಷಭೂಷಣ ತಯಾರಿಸುವ ಸ್ವರ್ಣ ಆರ್ಟ್ಸ್ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.