ದ.ಕ. ಜಿಲ್ಲಾ ಕಾಂಗ್ರೆಸ್ನಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ
ಮಂಗಳೂರು, ನ.19: ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ವಿವಾದಿತ ಮೂರು ರೈತ ಕಾಯ್ದೆಗಳನ್ನು ಹಿಂಪಡೆದ ಬಗ್ಗೆ ಸಂಭ್ರಮಾಚರಿಸಲಾಯಿತು.
ಮಾಜಿ ಸಚಿವ ರಮಾನಾಥ ರೈ ಮಾನತಾಡಿ, ಮೂಲಭೂತ ಸೌಲಭ್ಯಗಳನ್ನು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಇಂದಿರಾ ಗಾಂಧಿಯವರ ದೂರದೃಷ್ಟಿಯ ಆಡಳಿತ ಕ್ರಮ ಶ್ಲಾಘನೀಯ ಎಂದರು.
ಪಡಿತರ, ಮಾಸಾಶನ ಹಾಗೂ ಭೂ ಮಸೂದೆಯಂತಹ ಕ್ರಾಂತಿಕಾರಿಕ ಯೋಜನೆಗಳ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬನೆ ಬದುಕನ್ನು ಹೊಂದುವಂತೆ ಮಾಡಿದ ಅವರ ಸೇವೆಯನ್ನು ಯಾವತೂತಿ ಮರೆಯುವಂತಿಲ್ಲ ಎಂದು ಅವರು ಸ್ಮರಿಸಿದರು.
ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಇಂದಿರಾ ಗಾಂಧಿ ದೇಶದ ಶಕ್ತಿ. ದೇಶಕ್ಕೆ ಸಮಸ್ಯೆ ಬಂದಾಗ ಅನಿವಾರ್ಯವಾಗಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆದರೆ ಇದನ್ನು ಕೆಲವರು ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿ ಅವರ ಮೇಲೆ ಗೂಬೆ ಕೂರಿಸಿದ್ದಾರೆ. ಅವರ ಉದ್ದೇಶ ಒಳ್ಳೆಯದಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಯು.ಟಿ.ಖಾದರ್, ರಾಜ್ಯ ಸಭಾ ಮಾಜಿ ಸದಸ್ಯ ಬಿ.ಇಬ್ರಾಹಿಂ, ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೋಹನ್ ಗೌಡ ಮಾತನಾಡಿದರು.
ಮುಖಂಡರಾದ ಪದ್ಮನಾಭ ನರಿಂಗಾನ, ಹರಿನಾಥ್ ಕೆ, ವಿಶ್ವಾಸ್ ಕುಮಾರ್ ದಾಸ್,ಲುಕ್ಮಾನ್ ಬಂಟ್ವಾಳ್, ನವೀನ್ ಡಿಸೋಜ, ಪ್ರಕಾಶ್ ಸಾಲ್ಯಾನ್, ಸಿ.ಎಂ.ಮುಸ್ತಫಾ, ಸಬಿತಾ ಮಿಸ್ಕಿತ್, ಮುಹಮ್ಮದ್ ಕುಂಜತ್ತಬೈಲ್, ಮಲಾರ್ ಮೋನು, ಲ್ಯಾನ್ಸಿ ಲೋಟೊ ಪಿಂಟೊ, ಲಕ್ಷ್ಮೀ ನಾಯರ್, ಕೇಶವ ಮರೋಳಿ, ಧನಂಜಯ ಮಟ್ಟು, ಟಿ.ಕೆ.ಸುಧೀರ್, ನೀರಜ್ ಚಂದ್ರ ಪಾಲ್, ಶುಭೋದಯ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ, ಶಬ್ಬೀರ್ ಎಸ್, ನಝೀರ್ ಬಜಾಲ್, ಝೀನತ್ ಬಂದರ್ ಸಂಶುದ್ದೀನ್,ಉದಯ್ ಕುಂದರ್, ರಮಾನಂದ ಪೂಜಾರಿ, ಕವಿತಾ ವಾಸು, ಶೋಭಾ ಪಡೀಲ್, ಸಂಜನಾ ಚಲವಾದಿ, ಪ್ರೇಮ್ ಬಳ್ಳಾಲ್ ಭಾಗ್, ಟಿ.ಹೊನ್ನಯ್ಯ, ಹಯಾತುಲ್ ಖಾಮಿಲ್, ಮುಹಮ್ಮದ್ ಬಪ್ಪಳಿಗೆ, ಜೇಮ್ಸ್ ಶಿವಭಾಗ್, ಸಲೀಂ ಪಾಂಡೇಶ್ವರ, ಗಿರೀಶ್ ಶೆಟ್ಟಿ, ಸೌಹಾನ್ ಎಸ್.ಕೆ, ಮಲ್ಲಿಕಾರ್ಜುನ ಕೋಡಿಕಲ್, ಝಕಾರಿಯ ಮಲಾರ್, ಹಸನ್ ಫಳ್ನೀರ್, ಲಕ್ಷ್ಮಣ ಶೆಟ್ಟಿ, ಸೌಹಾನ್ ಡಿಸೋಜ, ಯಶವಂತ ಪ್ರಭು ಉಪಸ್ಥಿತರಿದ್ದರು. ಶಾಹುಲ್ ಹಮೀದ್ ಕೆ.ಕೆ ಸ್ವಾಗತಿಸಿದರು. ಶಶಿಧರ್ ಹೆಗ್ಡೆ ನಿರೂಪಿಸಿದರು.
ಕೇಂದ್ರ ಸರಕಾರ ರೈತರ ಹೋರಾಟಕ್ಕೆ ಮಣಿದು ಮೂರು ವಿವಾದಿತ ಕಾಯ್ದೆಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಸಿಹಿ ತಿಂಡಿ ಹಂಚಿ ರೈತರ ಗೆಲುವನ್ನು ಸಮಭ್ರಮಿಸಿದರು.