ಉಡುಪಿ; ಗುಜರಿ ಗೋದಾಮಿಗೆ ಬೆಂಕಿ: ಲಕ್ಷಾಂತರ ರೂ.ನಷ್ಟ

Update: 2021-11-19 15:39 GMT

ಉಡುಪಿ, ನ.19: ನಗರದ ಸಿಟಿಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್‌ನ ಹಿಂಬಂದಿಯಲ್ಲಿರುವ ಗುಜರಿ ಗೋದಾಮೊಂದಕ್ಕೆ ಇಂದು ಸಂಜೆಯ ಸುಮಾರಿಗೆ ಅಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಕಾಣಿಸಿಕೊಳ್ಳಲು ಸ್ಪಷ್ಟ ಕಾರಣಗಳು ಇನ್ನೂ ಗೊತ್ತಾಗಿಲ್ಲ.

ಹಳೆಯ ವಾಹನಗಳ ಬಿಡಿಭಾಗಗಳ ಗೋದಾಮು ಇದಾಗಿದ್ದು, ಹಳೆಯ ಟಯರ್, ಸೀಟು ಕವರ್ ಸೇರಿದಂತೆ ಹಲವು ಹಳೆಯ ಸಾಮಗ್ರಿಗಳು ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಗೋದಾಮಿನಲ್ಲಿ 12 ಸಿಲಿಂಡರ್‌ಗಳೂ ಇದ್ದವೆಂದು ತಿಳಿದುಬಂದಿದೆ.

ಉಡುಪಿ ಮತ್ತು ಮಲ್ಪೆಯ ಒಟ್ಟು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬಂದು ಉಡುಪಿಯ ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಸುಮಾರು ಎರಡೂವರೆಗೆ ಗಂಟೆಗಳ ಕಾಲ ಸೆಣಸಿ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸುಮಾರು 40,000 ಲೀ.ನೀರನ್ನು ಬಳಸಲಾಯಿತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News