ಯುವಕನ ಸಂಶಯಾಸ್ಪದ ಸಾವು: ದೂರು

Update: 2021-11-20 14:57 GMT

ಶಂಕರನಾರಾಯಣ, ನ.20: ಹಳ್ಳಿಹೊಳೆ ಗ್ರಾಮದ ಕಟ್ಟಿನಾಡಿ ದೇವರಬಾಳು ಎಂಬಲ್ಲಿ ಮೃತಪಟ್ಟ ಹೆರಿಯ ಮೊಗವೀರ ಎಂಬವರ ಮಗ ಸಂತೋಷ(30) ಎಂಬವರ ಸಾವಿನ ಬಗ್ಗೆ ಸಂಶಯ ಇರುವುದಾಗಿ ಮೃತರ ಮನೆಯವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಒಂದು ವರ್ಷದಿಂದ ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಇದ್ದ ಸಂತೋಷ್, ಫೋನಿನಲ್ಲಿ ಯುವತಿ ಜೊತೆ ಪ್ರೀತಿ ಹೆಸರಿನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದನು. ಈ ಸಂಬಂಧ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ನ.19ರಂದು ರಾತ್ರಿ ಮನೆಯ ಮಲಗುವ ಕೋಣೆಯ ಮಾಡಿನ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿನಲ್ಲಿ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News