ತೆಂಗಿನ ಮರದಿಂದ ಬಿದ್ದು ಮೃತ್ಯು
Update: 2021-11-20 14:58 GMT
ಉಡುಪಿ, ನ.20: ಕಾಯಿ ಕೀಳುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನ.20ರಂದು ಬೆಳಗ್ಗೆ 9ಗಂಟೆಗೆ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಬಳಿ ನಡೆದಿದೆ.
ಮೃತರನ್ನು ತೆಂಕಬೆಟ್ಟುವಿನ ಗೋಪಾಲ ನಾಯ್ಕ(41) ಎಂದು ಗುರುತಿಸ ಲಾಗಿದೆ. ಇವರು ನರೇಶ್ ಶೆಟ್ಟಿ ಎಂಬವರ ಜಾಗದಲ್ಲಿರುವ 25 ಅಡಿ ಎತ್ತರದ ತೆಂಗಿನ ಮರವನ್ನೇರಿ ಕಾಯಿಗಳನ್ನು ಕೀಳುವಾಗ ಆಕಸ್ಮಿಕವಾಗಿ ಆಯತಪ್ಪಿ, ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದ ಇವರು, ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.