ವಿಧಾನ ಪರಿಷತ್ ಚುನಾವಣೆ: 7 ಮಂದಿ ನಾಮಪತ್ರ ಸಲ್ಲಿಕೆ
Update: 2021-11-23 15:40 GMT
ಮಂಗಳೂರು, ನ.23: ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ವಿಧಾನ ಪರಿಷತ್ನ 2 ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಪಕ್ಷದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಪಕ್ಷದ ಮಂಜುನಾಥ ಭಂಡಾರಿ, ಎಸ್ಡಿಪಿಐ ಪಕ್ಷದ ಶಾಫಿ ಬೆಳ್ಳಾರೆ, (ಇಸ್ಮಾಯೀಲ್ ಶಾಫಿ ಕೆ.) ಬಿಜೆಪಿ ಪಕ್ಷದ ನಿತಿನ್ ಕುಮಾರ್ (ಡಮ್ಮಿ), ಪಕ್ಷೇತರರಾಗಿ ಎಂ. ಶಶಿಧರ, ನವೀನ್ ಕುಮಾರ್ ರೈ, ಕೌಶಿಕ್ ಡಿ. ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಈವರೆಗೆ ಒಟ್ಟು 14 ನಾಮಪತ್ರ ಸಲ್ಲಿಕೆಯಾಗಿದೆ.