ಗುರುಪುರ: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ

Update: 2021-11-25 09:54 GMT

ಮಂಗಳೂರು, ನ.26: ವ್ಯಕ್ತಿಯೊಬ್ಬರು ಗುರುಪುರ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದ್ದು, ತಕ್ಷಣ ಸ್ಥಳೀಯರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕದ್ರಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ನಾರಾಯಣ ಕೋಟ್ಯಾನ್ ಮತ್ತು ಶಕ್ತಿನಗರದ ರಿಕ್ಷಾ ಚಾಲಕ ಜಗದೀಶ್ ಯಾನೆ ಜಗ್ಗು ಎಂಬವರ ಮಧ್ಯೆ ಬುಧವಾರ ಜಗಳವಾಗಿತ್ತು. ತಲೆಗೆ ಬಲವಾದ ಗಾಯಗೊಂಡಿದ್ದ ನಾರಾಯಣ ಕೋಟ್ಯಾನ್ ಈ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ತನ್ನ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದರಿಂದ ಬೇಸರಗೊಂಡ ನಾರಾಯಣ ಕೋಟ್ಯಾನ್ ಜೈಲಿಗೆ ಹೋಗುವ ಬದಲಿಗೆ ಸಾಯುವುದೇ ಲೇಸೆಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News