ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

Update: 2021-11-26 16:31 GMT

ಬ್ರಹ್ಮಾವರ, ನ.26: ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೊಸಾಳ ಗ್ರಾಮ ಎಂಬಲ್ಲಿ ನಡೆದಿದೆ.

ಮೃತರನ್ನು ಬಿಲ್ಲಾಡಿ ಬನ್ನೇರಳಕಟ್ಟೆ ಹಾಲು ಡೈರಿ ಬಳಿಯ ನಿವಾಸಿ ಸೀತಾ ರಾಮ ಆಚಾರಿ ಎಂಬವರ ಮಗ ಶ್ರೀನಿವಾಸ ಆಚಾರಿ (32) ಮೃತರು  ಎಂದು ಗುರುತಿಸ ಲಾಗಿದೆ.

ಮರದ ಕೆಲಸಮಾಡಿಕೊಂಡಿದ್ದ ಇವರು, ನ.23ರಂದು ಸಂಜೆ ಹೊಸಾಳ ಗ್ರಾಮದ ನಾಗರಮಠ ಡ್ಯಾಮ್ ಬಳಿ ಹೊಳೆಯ ನೀರಿಗೆ ಮೀನು ಹಿಡಿಯಲು ಇಳಿದಿದ್ದರು. ಈಜಲು ಬಾರದ ಇವರು, ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿ ನಾಪತ್ತೆಯಾದರು. ಇವರು ಮೃತದೇಹವು ನ.26ರಂದು ಬೆಳಿಗ್ಗೆ 8:40 ಗಂಟೆ ಸುಮಾರಿಗೆ ಹೊಸಾಳ ಗ್ರಾಮದ ನಾಗರಮಠ ಬಳಿಯ ಸೀತಾನದಿ ಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News