ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2021-11-26 16:32 GMT

ಕೋಟ, ನ.26: ಉಬ್ಬಸ ಕಾಯಿಲೆ ಹಾಗೂ ಮಾನಸಿಕ ಕಾಯಿಲೆ ಬಳಲುತ್ತಿದ್ದ ಪಾರಂಪಳ್ಳಿ ಗ್ರಾಮದ ಪಡುಕೆರೆ ನ್ಯಾಯಬೆಲೆ ಅಂಗಡಿ ಬಳಿಯ ನಿವಾಸಿ ಲಕ್ಷ್ಮಿ ಮರಕಾಲ್ತಿ(62) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.24ರ ಬೆಳಗ್ಗೆಯಿಂದ ನ.26ರ ಬೆಳಗ್ಗಿನ ಮಧ್ಯಾವದಿಯಲ್ಲಿ ಮನೆ ಸಮೀಪ ಸೀರೆಗೆ ಶಿಲೆಕಲ್ಲು ಕಟ್ಟಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಅನಾರೋಗ್ಯದಿಂದ ಬಳಲುತ್ತಿದ್ದ ಕೊಡ್ಲಾಡಿ ಗ್ರಾಮದ ಬಾನಾಳಿಯ ವಿಠಲ್ ಶೆಟ್ಟಿ(62) ಜೀವನದಲ್ಲಿ ಜಿಗುಪ್ಸೆ ಗೊಂಡು ನ.25ರಂದು ಬೆಳಗ್ಗೆ ಮನೆಯಲ್ಲಿ ಅಡಿಕೆ ತೋಟಕ್ಕೆ ಸಿಂಪಡಿಸುವ ಔಷದಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News