ಕೆರೆಗೆ ಬಿದ್ದು ಮಹಿಳೆ ಮೃತ್ಯು

Update: 2021-11-26 16:33 GMT

ಶಂಕರನಾರಾಯಣ, ನ.26: ನೀರು ತರಲು ಹೋದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನ.25ರಂದು ಮಧ್ಯಾಹ್ನ ವೇಳೆ ಹೆಂಗವಳ್ಳಿ ಗ್ರಾಮದ ಕೆಪ್ಪೆಹೊಂಡ ಕೆರೆಹಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಕೆಪ್ಪಹೊಂಡ ನಿವಾಸಿ ರತ್ನಾಕರ ಎಂಬವರ ಪತ್ನಿ ಶಾರದ(30) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ಕೆರೆಗೆ ನೀರು ತರಲು ಹೋಗಿದ್ದು, ಅಲ್ಲಿ ಅಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿ ದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News