​ಸುರತ್ಕಲ್: ಎಸ್‌ಬಿಐ ಎಟಿಎಂಗೆ‌ ಮತ್ತೊಮ್ಮೆ ಹಾನಿ

Update: 2021-11-29 09:15 GMT

ಮಂಗಳೂರು, ನ.29: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ಹಾನಿ‌ ಎಸಗಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ‌. 

ಸೆ.9ರಂದು ಈ ಎಟಿಎಂನ ಗಾಜನ್ನು ಒಡೆದು ಹಾಕಲಾಗಿತ್ತು.  ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆ ನಡಯುತ್ತಿರುವ ಮಧ್ಯೆಯೇ ಇದೀಗ ಎರಡನೇ ಬಾರಿಗೆ ಈ ಬ್ಯಾಂಕ್‌ನ ಎಟಿಎಂ ಯಂತ್ರವನ್ನು ಕೆಳಗುರುಳಿಸಿ ಎಸಿ, ಸಿಸಿಟಿವಿಗೆ‌ ಹಾನಿಗೈಯಲಾಗಿದೆ. ದುಷ್ಕರ್ಮಿಯು ಹೆಲ್ಮೆಟ್‌ನಿಂದ ಗಾಜನ್ನು ಒಡೆದು ಹಾಕಿ ಬಳಿಕ ಒಳಗಿನ ಎಸಿಯನ್ನು ಹಾಳುಗೆಡವಿದ್ದು, ಇದರಿಙದ ಲಕ್ಷಾಂತರ ರೂ. ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಟ್ಟಡದ ಮಾಲಕ ಸತೀಶ್ ಸುರತ್ಕಲ್ ಪೊಲೀಸ್ ಠಾಣೆಗೆ ಮತ್ತು ಬ್ಯಾಂಕ್‌ನ ಅಧಿಕಾರಿಗಳಿಗೆ‌ ಮಾಹಿತಿ ನೀಡಿದ್ದಾರೆ. ಪರಿಸರದ ವ್ಯಕ್ತಿಯೊಬ್ಬ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News