ಮಂಗಳೂರು; ದೈಹಿಕ, ಮಾನಸಿಕ ಹಿಂಸೆ: ಪತಿ ಸಹಿತ ಮೂವರ ವಿರುದ್ಧ ಮಹಿಳೆ ದೂರು

Update: 2021-11-29 13:52 GMT
ಸಾಂದರ್ಭಿಕ ಚಿತ್ರ

ಮಂಗಳೂರು, ನ.29: ಪತಿ ಮತ್ತು ಇತರ ಇಬ್ಬರು ಸೇರಿಕೊಂಡು ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದಾಗಿ ಮಹಿಳೆಯೊಬ್ಬರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2021ರ ಮೇಯಲ್ಲಿ ನವೀನ್ ಠಾಕೂರ್‌ ನೊಂದಿಗೆ ತನ್ನ ಮದುವೆಯಾಗಿದ್ದು, ಬಳಿಕ 2 ತಿಂಗಳ ಕಾಲ ಶಕ್ತಿನಗರದಲ್ಲಿ ವಾಸವಾಗಿದ್ದೆವು. ಕೆಲವು ದಿನಗಳ ಅನಂತರ ನವೀನ್ ಠಾಕೂರ್ ಕುಡಿದು ಬಂದು ತನ್ನೊಂದಿಗೆ ಗಲಾಟೆ ಮಾಡಿ ಕೈಯಿಂದ ಹೊಡೆದು ಖರ್ಚಿಗೆ ಹಣ ತರುವಂತೆ ಮತ್ತು ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ ಇತರ ಆರೋಪಿಗಳಾದ ನರೇಶ್ ಠಾಕೂರ್ ಮತ್ತು ಪೂಜಾ ಠಾಕೂರ್ ಕೂಡ ತನ್ನ ಮನೆಗೆ ಬಂದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News