ವಿಧಾನ ಪರಿಷತ್ ಚುನಾವಣೆ; ದ.ಕ.ಜಿಲ್ಲೆಗೆ ಕ್ಯಾ. ಮಣಿವಣ್ಣನ್ ವೀಕ್ಷಕ

Update: 2021-11-29 14:46 GMT

ಮಂಗಳೂರು, ನ.29: ವಿಧಾನ ಪರಿಷತ್‌ಗೆ ಡಿ.10ರಂದು ಚುನಾವಣೆ ನಡೆಯಲಿದ್ದು, ದ.ಕ.ಜಿಲ್ಲೆಗೆ ಕ್ಯಾಪ್ಟನ್ ಮಣಿವಣ್ಣನ್ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿ ಚುನಾವಣಾ ಆಯೋಗ ಆದೇಶಿಸಿದೆ.

ಚುನಾವಣೆಯ ಬಗ್ಗೆ ಮಾಹಿತಿ ಪಡೆಯಲು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ದಾಖಲಿಸಲು ಪ್ರತೀ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ದೂರುಗಳು ಹಾಗೂ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ದೂ.ಸಂ: 0824-2220590, ನಗರದ ತಾಲೂಕು ಕಚೇರಿ ದೂ.ಸಂ: 0824-2220587, ಮೂಡಬಿದಿರೆ ತಾಲೂಕು ಕಚೇರಿ ದೂ.ಸಂ: 08251-238100, ಬಂಟ್ವಾಳ ತಾಲೂಕು ಕಚೇರಿ ದೂ.ಸಂ: 08255-232124, ಬೆಳ್ತಂಗಡಿ ತಾಲೂಕು ಕಚೇರಿ ದೂ.ಸಂ: 08256-232047, ಪುತ್ತೂರು ತಾಲೂಕು ಕಚೇರಿ ದೂ.ಸಂ: 08251-230349, ಕಡಬ ತಾಲೂಕು ಕಚೇರಿ ದೂ.ಸಂ: 08251-260435, ಸುಳ್ಯ ತಾಲೂಕು ಕಚೇರಿ ದೂ.ಸಂ: 08257-231231ನ್ನು ಸಂಪರ್ಕಿಸಬಹುದಾಗಿದೆ.

ಮಣಿವೆಣ್ಣನ್ ಅವರನ್ನು (ಮೊ.ಸಂ: 9663369000) ಕೂಡ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News