ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷರಾಗಿ ಎಂ.ಎಸ್.ಖಾನ್

Update: 2021-11-29 16:43 GMT
ಎಂ.ಎಸ್.ಖಾನ್-ಸಿರಿಲ್ ಮೊಂತೆರೊ

ಉಡುಪಿ, ಜ.29: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ನ.21ರಂದು ಉಡುಪಿ ಶೋಕ ಮಾತೆ ಚರ್ಚಿನ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಅವಿರೋದವಾಗಿ ಆಯ್ಕೆ ಯಾದರು. ಅಧ್ಯಕ್ಷರಾಗಿ ಎಂ.ಎಸ್.ಖಾನ್ ಹೂಡೆ, ಉಪಾಧ್ಯಕ್ಷರಾಗಿ ರೋಬರ್ಟ್ ಮಿನೇಜಸ್ ಕಣಜಾರು, ಕಾರ್ಯದರ್ಶಿಯಾಗಿ ಸಿರಿಲ್ ಮೊಂತೆರೊ ಕೊಳಲಗಿರಿ, ಕೋಶಾಧಿಕಾರಿ ಯಾಗಿ ಲೂವಿಸ್ ಅಲ್ಮೇಡಾ ಮಣಿಪಾಲ, ಸಹ ಕಾರ್ಯದರ್ಶಿಯಾಗಿ ಕೆ.ಪಿ ಇಬ್ರಾಹಿಂ, ಸಹ ಕೋಶಾಧಿಕಾರಿ ಯಾಗಿ ಸೆವ್ರಿನ್ ಡೇಸಾ, ಸಲಹೆಗಾರರಾಗಿ ರೆ.ಫಾ.ಚಾರ್ಲ್ಸ್ ಮಿನೇಜಸ್, ಬೈಕಾಡಿ ಹುಸೇನ್ ಹಾಗೂ ಫಾರೂಕ್ ಕಾರ್ಕಳ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸೆವ್ರಿನ್ ಡೇಸಾ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಎಸ್.ಖಾನ್ ವಾರ್ಷಿಕ ವರದಿಯನ್ನು ಮಂಡಿಸಿದ ನಂತರ ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೋ 2021-22 ಸಾಲಿನ ಪದಾಧಿಕಾರಿಗಳ ಚುನಾವಣೆಯನ್ನು ನಡೆಸಿದರು. ನೂತನ ಕಾರ್ಯದರ್ಶಿ ಸಿರಿಲ್ ಮೊಂತೆರೂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News