ಚರ್ಚಿಗೆ ನುಗ್ಗಿ ಸೊತ್ತು ಕಳವು

Update: 2021-11-29 16:52 GMT

ಉಡುಪಿ, ನ.29: ನಗರದ ಮಿಶನ್ ಕಂಪೌಂಡ್‌ನಲ್ಲಿರುವ ಚರ್ಚಿಗೆ ನುಗ್ಗಿದ ಓರ್ವ ಕಳ್ಳ, ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನ.28ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮಿಶನ್ ಕಂಪೌಂಡ್ ಸಿಎಸ್‌ಐ ಜುಬಿಲಿ ಚರ್ಚಿನ ಹಂಚುಗಳನ್ನು ತೆಗೆದು ಒಳಪ್ರವೇಶಿಸಿದ ಕಳ್ಳ, ದೇವಾಲಯದಲ್ಲಿದ್ದ ನಗದು 9,500ರೂ. ಹಾಗೂ ಸೊತ್ತು ಕಳವು ಮಾಡಿಕೊಂಡು ಹೋಗಿರುವುದಾಗಿ ಚರ್ಚಿನ ಧರ್ಮಗುರು ರೆವರೆಂಡ್ ಕಿಶೋರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News