×
Ad

ಮಂಗಳೂರು; ಜ್ಯೋತಿಷಿಯಿಂದ ಮಹಿಳೆಗೆ ವಂಚನೆ ಆರೋಪ: ದೂರು ದಾಖಲು

Update: 2021-11-30 21:48 IST

ಮಂಗಳೂರು, ನ.30: ಪೂಜೆಯ ಸಂದರ್ಭ ಕಲಶಕ್ಕೆ ಇಟ್ಟ ಚಿನ್ನದ ಕರಿಮಣಿ ಸರವನ್ನು ವಾಪಸ್ ನೀಡದೆ ಜ್ಯೋತಿಷಿಯೋರ್ವ ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆಯಲ್ಲಿ ಕಷ್ಟವಿದ್ದ ಕಾರಣ ಮಹಿಳೆಯು ಅ.13ರಂದು ಕುಂಜತ್ತಬೈಲ್‌ ನಲ್ಲಿರುವ ಜ್ಯೋತಿಷಿ ವಿನೋದ ಪೂಜಾರಿ ಎಂಬಾತನ ಬಳಿ ಹೋಗಿದ್ದರು. ‘ನಿಮಗೆ ತುಂಬಾ ದೋಷವಿದೆ. ಆ ದೋಷವನ್ನು ಕಳೆಯುವುದಕ್ಕಾಗಿ ಪೂಜೆ ಮಾಡಿಸಿಕೊಡುತ್ತೇನೆ. ಪೂಜೆಯ ಸಮಯ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು’ ಎಂದು ವಿನೋದ ಪೂಜಾರಿ ಹೇಳಿದ್ದ. ಅದರಂತೆ ಮಹಿಳೆಯು ಸುಮಾರು 5.5 ಪವನ್ ತೂಕದ ಚಿನ್ನದ ಕರಿಮಣಿಸರವನ್ನು ಪೂಜೆಗೆಂದು ನೀಡಿದ್ದರು.

ವಿನೋದ್ ಪೂಜಾರಿ ಈ ಸರವನ್ನಿಟ್ಟು 15 ದಿನಗಳ ಕಾಲ ಪೂಜೆ ಮಾಡಿ ವಾಪಸ್ ನೀಡುವುದಾಗಿ ತಿಳಿಸಿದ್ದ. ಆದರೆ ಅನಂತರವೂ ನೀಡದೆ ವಂಚಿಸಿ ತಲೆಮರೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News