ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹಣ ಕಳವು
Update: 2021-12-01 16:18 GMT
ಬೈಂದೂರು, ಡಿ.1: ಕೆರ್ಗಾಲು ಗ್ರಾಮದ ಶ್ರೀವನದುರ್ಗ ದೇವಿ ದೇವಸ್ಥಾನಕ್ಕೆ ನ.30ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಸಾವಿರಾರು ರೂ. ಹಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಮುಖ್ಯ ದ್ವಾರದ ಬಾಗಿಲಿಗೆ ಹಾಕಿದ ಬೀಗ ಮುಗಿದು ಒಳಗೆ ಪ್ರವೇಶಿಸಿದ ಕಳ್ಳರು, ದೇವಸ್ಥಾನದ ಒಳಗೆ ಇದ್ದ 3 ಸ್ಟೀಲ್ನ ಕಾಣಿಕೆ ಹುಂಡಿ ಗಳನ್ನು ಒಡೆದು ಅದರಲ್ಲಿದ್ದ ಸುಮಾರು 20,000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.