​ಪ್ರತ್ಯೇಕ ಘಟನೆ : ಇಬ್ಬರು ಆತ್ಮಹತ್ಯೆ

Update: 2021-12-03 16:20 GMT

ಬ್ರಹ್ಮಾವರ, ಡಿ.3: ನೇಣು ಬಿಗಿದು ಯುವಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಕಾಡಿ ಗ್ರಾಮದಿಂದ ವರದಿಯಾಗಿದೆ. ವಿನಯ್ ಕೆ.ಆರ್.(32) ಆತ್ಮಹತ್ಯೆ ಮಾಡಿಕೊಂಡ ಯುವಕ.

ವಿನಯ್ ಅವರು ಬೈಕಾಡಿ ಗ್ರಾಮದ ರಾಮಭಜನ ಮಂದಿರದ ಬಳಿ ಇರುವ ಮನೆಯ ಕೋಣೆಯಲ್ಲಿ ನಿನ್ನೆ ರಾತ್ರಿ 8:30ರ ಸುಮಾರಿಗೆ ಪತ್ತೆಯಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಸಾಂಸಾರಿಕ ಸಮಸ್ಯೆ ಅಥವಾ ಇನ್ನಾವುದೋ ಸಮಸ್ಯೆಯಿಂದ ಮನನೊಂದ ವಲಸೆ ಕಾರ್ಮಿಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಪಡುಅಲೆವೂರಿನಿಂದ ವರದಿಯಾಗಿದೆ.

ಐಹೊಳೆಯ ಮಂಜುನಾಥ ಗುರಕಿ (44) ಮೃತಪಟ್ಟವರು. ಇವರು ಇಂದು ಬೆಳಗ್ಗೆ 8:30ರಿಂದ 11 ಗಂಟೆಯ ಅವಧಿಯ ನಡುವೆ ತಾನು ವಾಸವಾಗಿದ್ದ ಪಡು ಅಲೆವೂರು ದುರ್ಗಾನಗರದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News