​ಕಾರ್ಕಳ: ವಕೀಲರ ದಿನಾಚರಣೆ

Update: 2021-12-04 06:57 GMT

ಕಾರ್ಕಳ: ಕಾರ್ಕಳ ವಕೀಲರ ಸಂಘದ ವತಿಯಿಂದ ವಕೀಲರ  ದಿನಾಚರಣೆಯನ್ನು ಕಾರ್ಕಳ ವಕೀಲರ  ಭವನದಲ್ಲಿ ಆಚರಿಸಲಾಯಿತು.

ಸಮಾರಂಭದ ಕಾರ್ಕಳ ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧಿಶ ರಾದ ಚೇತನ ಎಸ್.ಎಫ್. ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ   ಅಧ್ಯಕ್ಷತೆಯನ್ನು ವಕೀಲರ  ಸಂಘದ ಅಧ್ಯಕ್ಷರಾದ  ಸುನಿಲ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ  ಅತಿಥಿಯಾಗಿ ವೈಕುಂಠ ಬಾಳಿಗ  ಲಾ ಕಾಲೇಜ್ ಉಡುಪಿ ಇದರ ಪ್ರಾಂಶುಪಾಲೆ ಪ್ರೊ.ಡಾ.ನಿರ್ಮಲ ಕುಮಾರಿ ಕೆ ಹಾಗೂ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನ್ಯಾಯವಾದಿ ಎಂ.ಕೆ.ವಿಜಯಕುಮಾರ್  ಹಾಗೂ  ಸರ್ಕಾರಿ ಅಭಿಯೋಜಕರಾದ ಶೋಭಾ ಎಂ.ನಾಯ್ಕ್  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ನೂತನ ಸದಸ್ಯರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್.ಎನ್. ಕಾರ್ಯಕ್ರಮ ನಿರ್ವಹಿಸಿ ಜತೆ ಕಾರ್ಯದರ್ಶಿ ಸವಿತಾ ಹೆಗ್ಡೆ ಸ್ವಾಗತಿಸಿದರು.

ಉಪಾಧ್ಯಕ್ಷ ದಯಾನಂದ ನಾಯ್ಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News