ಕಾರ್ಕಳ : ಡಿ.5ರಂದು ಪುನೀತ್‌ ರಾಜ್‌ಕುಮಾರ್‌, ಪ್ರದೀಪ್‌ ಕೋಟ್ಯಾನ್‌ ಅವರಿಗೆ ನುಡಿನಮನ ಕಾರ್ಯಕ್ರಮ

Update: 2021-12-04 10:20 GMT

ಕಾರ್ಕಳ : ಇತ್ತೀಚೆಗೆ ನಿಧನರಾದ ಕನ್ನಡ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಕಾರ್ಕಳ ಪುರಸಭಾ ಮಾಜಿ ಅಧ್ಯಕ್ಷ ಪ್ರದೀಪ್‌ ಕೋಟ್ಯಾನ್‌ ಅವರಿಗೆ ಡಿ. 5ರ ಸಂಜೆ 4 ಗಂಟೆಗೆ ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್.‌ ರಾಜು ಅ‍ಧ್ಯಕ್ಷತೆ ವಹಿಸಲಿದ್ದು,  ಸಚಿವ ವಿ. ಸುನಿಲ್‌ ಕುಮಾರ್‌, ಖ್ಯಾತ ರಂಗಭೂಮಿ ಕಲಾವಿದ ಭೋಜರಾಜ್‌ ವಾಮಂಜೂರು, ಪುರಸಭಾ ಅ‍‍ಧ್ಯಕ್ಷೆ ಸುಮಾ ಕೇಶವ್‌, ಕರ್ನಾಟಕ ರಾಜ್ಯ ಗೇರು ನಿಗಮ ನಿ. ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಕಾರ್ಕಳ ಡಿವೈಎಸ್‌ಪಿ ವಿಜಯ್‌ ಪ್ರಸಾದ್‌,  ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೊನ್ ಕ್ರಷರ್  ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಹಿತ್‌ ಕುಮಾರ್‌ ಕಟೀಲ್‌ ಭಾಗವಹಿಸಲಿರುವರು ಎಂದು ಸ್ಮರಣಾಂಜಲಿ ಕಾರ್ಯಕ್ರಮ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News