ಭಟ್ಕಳ: ರಸ್ತೆ ಅಪಘಾತ; ನಾಲ್ವರಿಗೆ ಗಾಯ

Update: 2021-12-04 17:26 GMT

ಭಟ್ಕಳ: ಮಣ್ಕುಳಿಯ ಶೆಟ್ಟಿ ಗ್ಯಾರೇಜ್ ಮುಂಭಾಗದಲ್ಲಿ ರಿಪೇರಿಗೆಂದು ನಿಲ್ಲಿಸಿದ್ದ ಟಿಪ್ಪರ್ ಗೆ ಖಾಸಗಿ ಬಸ್ಸೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಾಯಾಗಳಾಗಿರುವ ಘಟನೆ ಶನಿವಾರ ವರದಿಯಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಖಾಸ್ ಬಸ್ ಚಾಲಕ ರಾಜೀವ್ ತೆಕ್ಕಟ್ಟೆ, ನಿರ್ವಾಹಕ ಇಸ್ಮಾಯಿಲ ಕಿರಿಮಂಜೇಶ್ವರ, ಪ್ರಯಾಣಿಕರಾದ ಖಾಲಿದ್ ಬೈಂದೂರು, ಆಸೀಫಾ, ರಾಘು ಖಾರ್ವಿ ಮತ್ತು ಸದೀಪ್ ಮಂಗಳೂರು ಎಂದು ಗುರುತಿಸಲಾಗಿದೆ. 

ಗಾಯಾಳುಗಳಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News