ಭಟ್ಕಳ: ಕವಿ, ಸಾಹಿತಿ ಅಬ್ದುಲ್ಲಾ ರಫೀಖ್ ನಿಧನ
Update: 2021-12-04 17:30 GMT
ಭಟ್ಕಳ: ಇಲ್ಲಿನ ಖ್ಯಾತ ಉರ್ದು, ನವಾಯತಿ ಕವಿ ಹಾಗೂ ಸಾಹಿತಿ ಅಬ್ದುಲ್ಲಾ ರಫೀಖ್ (81) ಶನಿವಾರ ಸಂಜೆ ಹೆಬಳೆ ಪಂಚಾಯತ್ ವ್ಯಾಪ್ತಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮುಂಬೈಯಿಂದ ಪ್ರಕಟಗೊಳ್ಳುತ್ತಿದ್ದ ಅನ್ನವಾಯತ್ ಮಾಸಿಕದ ಉಪಸಂಪಾದಕರಾಗಿದ್ದ ಇವರು ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಜಮಾಅತೆ ಇಸ್ಲಾಮಿ ಹಿಂದ್, ಇದಾರೆ ಅದಬೆ ಇಸ್ಲಾಮಿ, ಇದಾರಾ ತರಬಿಯತ್ ಇಖ್ವಾನ್ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದರು.
ಇವರ ನಿಧನಕ್ಕೆ ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಕಾದಿರ್ ಮೀರಾ ಪಟೇಲ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.