ಬೆಳ್ಳಾರೆ ಎಸ್ ಡಿಪಿಐ ವತಿಯಿಂದ ಶ್ರಮದಾನ
Update: 2021-12-05 14:46 GMT
ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಬೆಳ್ಳಾರೆ 1ನೇ ವಾರ್ಡಿನ ಕೊಳಂಬಲ ಉಮಿಕ್ಕಳ ರಸ್ತೆಯ ಇಕ್ಕೆಲಗಳ ಭಾಗದಲ್ಲಿ ತುಂಬಿಕೊಂಡಿದ್ದ ಪೊದೆಗಳನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ನ ಬೆಳ್ಳಾರೆ ಪಂಚಾಯಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸುಳ್ಯ ವಿಧಾನ ಸಭಾ ಕ್ಷೇತ್ರದ ಕೋಶಾಧಿಕಾರಿ ಹಾಜಿ. ಕೆ ಮಮ್ಮಾಲಿ, ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಶಹೀದ್ ಎಂ, ಎಸ್ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಎಂ, ಉಪಾಧ್ಯಕ್ಷ ಶಫೀಕ್, ಕಾರ್ಯದರ್ಶಿ ಜಾಬಿರ್ ಸಿ.ಎಂ, ಸಮಿತಿ ಸದಸ್ಯರಾದ ಬಶೀರ್, ಬಿಎ ಝೈನುದ್ದೀನ್.ಯು ಎಚ್ , ಉಮಿಕ್ಕಳ ಬೂತ್ ಅಧ್ಯಕ್ಷ ಆಸಿರ್ ಎ.ಬಿ, ಪಳ್ಳಿಮಜಲು ಬೂತ್ ಅಧ್ಯಕ್ಷ ಸದ್ದಾಂ ಹುಸೇನ್, ಪನ್ನೆ ಬೂತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಟಿ, ತಡಗಜೆ ಬೂತ್ ಅಧ್ಯಕ್ಷ ಬಶೀರ್ ಕೆ.ಎ, ಪಂಚಾಯಿತಿ ಸದಸ್ಯೆ ನಸೀಮಾ ಪತಿ ಹಾರಿಸ್ ಪಳ್ಳಿಮಜಲು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.