ಉಪ್ಪಿನಂಗಡಿ : ಯುವಕರ ಮೇಲೆ ತಂಡದಿಂದ ತಲವಾರು ದಾಳಿ; 5 ಮಂದಿಗೆ ಗಾಯ

Update: 2021-12-05 17:20 GMT

ಉಪ್ಪಿನಂಗಡಿ : ಐದು ಮಂದಿ ಯುವಕರ ಮೇಲೆ ಗುಂಪೊಂದು ತಲವಾರು ದಾಳಿ ನಡೆಸಿದ ಘಟನೆ ರವಿವಾರ ಸಂಜೆ ಇಲಂತಿಲ ಗ್ರಾಮದ ಅಂಡೆತಡ್ಕದಲ್ಲಿ ನಡೆದಿದೆ.

ಇಲ್ಲಿನ ಅಂಗಡಿಯೊಂದರ ಬದಿಯಲ್ಲಿ 7 ಗಂಟೆಯ ಸುಮಾರಿಗೆ ಸ್ಥಳೀಯ ನಿವಾಸಿಗಳಾದ ಫಯಾಝ್ (26) ಹಾಗು ಅಫೀಝ್ (19) ಎಂಬವರು ಕುಳಿತುಕೊಂಡಿದ್ದ ವೇಳೆ ಅಲ್ಲಿಗೆ ಬಂದ 4-5 ಮಂದಿಯ ತಂಡ ಅವರ ಮೇಲೆ ಏಕಾಏಕಿ ತಲವಾರು ದಾಳಿ ನಡೆಸಿದ್ದಾರೆ. ಗಾಯಗೊಂಡ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕದ ಬೆಳವಣಿಗೆಯಲ್ಲಿ ರಾತ್ರಿ ಸುಮಾರು 8.30ರ ವೇಳೆಗೆ 30-40 ಮಂದಿ ಬೈಕ್ ಗಳಲ್ಲಿ ಬಂದಿದ್ದು ಅಂಡೆತಡ್ಕದ ಅಂಗಡಿಯಲ್ಲಿ ಕುಳಿತುಕೊಂಡಿದ್ದ ಸಿದ್ದೀಕ್, ಅಯ್ಯೂಬ್, ಝಕರಿಯಾ ಎಂಬವರ ಮೇಲೆ ತಲವಾರು ದಾಳಿ ನಡೆಸಿದ್ದಾರೆ.

ಇದು ಅಂಡೆತಡ್ಕದ ಜಯರಾಮ ಮತ್ತು ತಂಡದ ಕೃತ್ಯ ಎಂದು ಸ್ಥಳೀಯರು ದೂರಿದ್ದಾರೆ. ಘಟನೆಗೆ ಸ್ಪಷ್ಟ ಕಾರಣವೇನೆಂದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರು ತೆರಳಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News