ಎಣ್ಮೂರು: ನೂತನ ಶಾದಿ ಮಹಲ್ ಉದ್ಘಾಟನೆ, ಬಡ ಹೆಣ್ಮಕ್ಕಳ ಮದುವೆ ಕಾರ್ಯಕ್ರಮ

Update: 2021-12-06 12:41 GMT

ಸುಳ್ಯ, ಡಿ.6: ತಾಲೂಕಿನ ಎಣ್ಮೂರು ಐವತ್ತೂಕ್ಲು ಕೇಂದ್ರ ರಹ್ಮಾನಿಯಾ ಜುಮಾ ಮಸ್ಜಿದ್ ಅಧೀನದಲ್ಲಿರುವ ನೂತನ ಶಾದಿ ಮಹಲ್ ಉದ್ಘಾಟನೆ, ಮುಸ್ಲಿಂ ಯುವಜನ ಸಂಘದ ಆಶ್ರಯದಲ್ಲಿ ಬಡ ಹೆಣ್ಮಕ್ಕಳ ವಿವಾಹ ಮತ್ತು ಶಂಸುಲ್ ಉಲಮಾ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ಡಿ.5ರಂದು ನಡೆಯಿತು.
ಶಾದಿ ಮಹಲ್ ಅನ್ನು ವಾಲೆಮುಂಡೋವು ಮಹಮೂದುಲ್ ಫೈಝಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸ್ಜಿದ್ ಗೌರವಾಧ್ಯಕ್ಷ ಹಾಜಿ ಕುಂಞಿಪಳ್ಳಿ ಐವತ್ತೂಕ್ಲು ವಹಿಸಿದ್ದರು.
ಈ ಸಂದರ್ಭ ಜುಮಾ ಮಸ್ಜಿದ್ ಅಧ್ಯಕ್ಷ ಇಸ್ಮಾಯೀಲ್ ಕೆ.ಎಂ., ಸ್ಥಳೀಯ ಖತೀಬ್ ಅಬ್ದುಲ್ಲ ಮದನಿ ರೆಂಜ, ಶಂಸುದ್ದೀನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
  
ಬಳಿಕ ನಡೆದ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬಡ ಹೆಣ್ಮಕ್ಕಳ ಮದುವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂವೈಎಸ್ ಅಧ್ಯಕ್ಷ ಹಮೀದ್ ಮರಕ್ಕಡ ವಹಿಸಿದ್ದರು. ಕಜೆ ನಿಂತಿಕಲ್ಲು ಜುಮಾ ಮಸ್ಜಿದ್ ಖತೀಬ್ ಜಾಫರ್ ಸಅದಿ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ನವ ಸನದುದಾರಿಗಳನ್ನು ಸನ್ಮಾನಿಸಲಾಯಿತು.
ಮುಸ್ತಫ ಸಅದಿ ಕೊಳ್ತಂಕರೆ ಸ್ವಾಗತಿಸಿದರು. ಎಂವೈಎಸ್ ಕಾರ್ಯದರ್ಶಿ ರಫೀಕ್ ಟಿ.ಎಸ್. ವಂದಿಸಿದರು. ಸಿ.ಎಂ.ರಫೀಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News