ಕೋಟ ಮಸೀದಿಗೆ ರಾಜ್ಯ ವಕ್ಫ್ ಅಧ್ಯಕ್ಷ ಶಾಫಿ ಸಅದಿ ಭೇಟಿ
Update: 2021-12-06 14:11 GMT
ಕೋಟ, ಡಿ.6: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಎನ್. ಕೆ.ಎಂ.ಶಾಫಿ ಸಅದಿ ರವಿವಾರ ಕೋಟ ಜಾಮಿಯಾ ಮಸೀದಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಸೀದಿಗೆ ಸೋಲಾರ್ ಲೈಟ್ ಸಿಸ್ಟಮ್ ಆಳವಡಿಸುವ ಕುರಿತ ಮನವಿಗೆ ಪ್ರತಿಕ್ರಿಯಿಸಿದ ಶಾಫಿ ಸಅದಿ, ವಕ್ಫ್ ಬೋರ್ಡ್ನಲ್ಲಿ ಸೋಲಾರ್ ಲೈಟ್ಗೆ ಯಾವುದೇ ಅನುದಾನ ಇಲ್ಲ. ನಮ್ಮ ವಕ್ಫ್ ಬೋರ್ಡ್ನಲ್ಲಿ ಮಸೀದಿ, ಮದರಸ, ದರ್ಗಾಗಳ ದುರಸ್ಥಿಗೆ ಹಾಗೂ ಮಸೀದಿಗಳ ಕಾಂಪೌಂಡ್, ಶೌಚಾಲಯ, ಖಬರ್ಸ್ತಾನ್ಗಳಿಗೆ ಅನುದಾನ ನೀಡಲಾಗುವುದು ಎಂದರು.
ಮಸೀದಿಯ ಧರ್ಮಗುರು ಮೂಮಿನ್ ಅಷ್ಪಕ್ ನೂತನ ವಕ್ಫ್ ಅಧ್ಯಕ್ಷರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಜಿ. ಯಾಕೂಬ್ ಹೊಸನಗರ ಹಾಗೂ ಕೋಟ ಜಾಮಿಯಾ ಮಸೀದಿಯ ಕಮಿಟಿಯ ಸರ್ವ ಸದಸ್ಯರು ಮತ್ತು ಜಮಾತ್ ಬಾಂಧವರು ಉಪಸ್ಥಿತರಿದ್ದರು.