ಮನೆಗೆ ನುಗ್ಗಿ ನಗದು ಕಳವು
Update: 2021-12-06 16:33 GMT
ಗಂಗೊಳ್ಳಿ, ಡಿ.6: ಮನೆಗೆ ನುಗ್ಗಿದ ದುಷ್ಕರ್ಮಿಗಳು ಸಾವಿರಾರು ರೂ. ನಗದು ಕಳವು ಮಾಡಿರುವ ಘಟನೆ ಪಡುಕೋಣೆ ಮಾರಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಜಯಂತಿ ಮೊಗವೀರ ಡಿ.28ರಂದು ಮನೆಗೆ ಬೀಗ ಹಾಕಿ ಮಗಳ ಮನೆ ಯಾದ ಕೋಟ ಮಣೂರಿಗೆ ಹೋಗಿದ್ದು, ಡಿ.3ರಂದು ವಾಪಾಸ್ಸು ಮನೆಗೆ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಕಪಾಟು ಹಾಗೂ ಕಬ್ಬಿಣದ ಪೆಟ್ಟಿಗೆಯ ಬೀಗ ಒಡೆದು ಅದರಲ್ಲಿದ್ದ ಒಟ್ಟು 85,000ರೂ. ಹಣವನ್ನು ಕಳವು ಮಾಡಿದ್ದಾರೆ. ಅಲ್ಲದೆ ದೇವರ ಹುಂಡಿ ಹಾಗೂ ಬಟ್ಟೆ ಬರೆಗಳು ಚಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.